Karnataka Assembly Winter Session: ರಾಜಕಾರಣವನ್ನು ವೃತ್ತಿಯನ್ನಾಗಿ ಮಾಡಿಕೊಂಡವರು ವೃತ್ತಿಗೆ ಅನ್ವಯಿಸುವ ನೀತಿ ನಿಯಮಗಳನ್ನು ರೂಢಿಸಿಕೊಂಡು ವೃತ್ತಿಪರ ಧೋರಣೆ ಪ್ರದರ್ಶಿಸಬೇಕಾಗುತ್ತದೆ. ಹಿರಿಯ ಶಾಸಕರಾದ ಕೆಜೆ ಜಾರ್ಜ್, ಆರಗ ಜ್ಞಾನೇಂದ್ರ, ಸುರೇಶ್ ಗೌಡ, ಅಶ್ವಥ್ ನಾರಾಯಣ ಮೊದಲಾದವರೆಲ್ಲ ಸಮಯಕ್ಕೆ ಸರಿಯಾಗಿ ಸದನಕ್ಕೆ ಸರಿಯಾಗಿ ಅಗಮಿಸಿ ಯುವ ನಾಯಕರಿಗೆ ಮಾದರಿಯಾಗಿದ್ದಾರೆ, ಅವರನ್ನು ಅನುಸರಿಸಬೇಕು ಎಂದು ಸ್ಪೀಕರ್ ಖಾದರ್ ಅವರು ಹೇಳುವುದು ಅತ್ಯಂತ ಉಚಿತವಾಗಿದೆ.