ವಿಕ್ರಂ ಗೌಡನ ಸಹೋದರಿ ಸುಗುಣ

ಸುಗುಣ ಕುಟುಂಬ ಬಡತನದಲ್ಲಿ ಜೀವಿಸುತ್ತಿದೆ, ಮಗ ಮತ್ತು ಮಗಳು ದುಡಿದು ತಂದರೆ ಮಾತ್ರ ಮನೆಯಲ್ಲಿ ಅನ್ನ ಬೇಯುತ್ತದೆ, ಮನೇಲಿ ಒಬ್ಬ ವ್ಯಕ್ತಿ ಹಾಸಿಗೆ ಹಿಡಿದಿದ್ದಾರೆ, ಕೈಕಾಲು ಬಿದ್ದುಹೋಗಿರುವುದರಿಂದ ಅವರಿಗೆ ಎದ್ದು ನಿಲ್ಲಲೂ ಅಗಲ್ಲ. ಈ ಭಾಗದಲ್ಲಿ ದಿನಗೂಲಿ ಬಹಳ ಕಡಿಮೆ ಎನ್ನಲಾಗುತ್ತಿದೆ, ಹಾಗಾಗಿ ತಮಗೊಂದು ಸೂರು ಮತ್ತು ಪರಿಹಾರ ನೀಡಿದರೆ ಬಹಳ ಪ್ರಯೋಜನವಾಗುತ್ತದೆ ಎಂದು ಸುಗುಣ ಹೇಳುತ್ತಾರೆ.