ಸದನದಲ್ಲಿ ಸಿದ್ದರಾಮಯ್ಯ ಮತ್ತು ಅಶೋಕ ನಡುವೆ ವಾಗ್ವಾದ

Karnataka Assembly Session: ತಾನು ಪ್ರಸ್ತಾಪಿಸಬೇಕೆಂದಿರುವ ವಿಷಯ ಅಜೆಂಡಾದಲ್ಲೇ ಇಲ್ಲ ಎಂದು ಅಶೋಕ ಹೇಳಿದಾಗ ಸಿದ್ದರಾಮಯ್ಯ ಅಸಹನೆಯಿಂದಲೇ ಇದೆ ಕಣ್ರೀ ಅನ್ನುತ್ತಾರೆ. ಹಿಂದೆ ನೀವು ಸಹ ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನವನ್ನು ಹೀಗೆ ನಡೆಸಿದ್ರಾ ಅಂತ ಅಶೋಕ ಕೋಪದಿಂದ ಕೇಳಿದಾಗ ಸಿದ್ದರಾಮಯ್ಯ ನೀವು ಹೇಳಿದಂತೆ ಸದನವನ್ನು ನಡೆಸಲಾಗಲ್ಲ ಅನ್ನುತ್ತಾರೆ.