ಗಜಗಳಿಗೆ ಇಂದು ಮಧ್ಯಾಹ್ನ ಅರಮನೆಯ ಜಯಮಾರ್ತಂಡ ದ್ವಾರಗಳಲ್ಲಿ ಪೂಜೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಸಮಕ್ಷಮದಲ್ಲಿ ಆರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಜಂಬೂಸವಾರಿ ತಾಲೀಮಿಗಾಗಿ ಆನೆಗಳು ಇಂದಿನಿಂದ ಅರಮನೆ ಆವರಣದಲ್ಲೇ ಉಳಿಯಲಿವೆ. ಬಗೆಬಗೆಯ ಪೌಷ್ಟಿಕಾಂಶಭರಿತ ಭಕ್ಷ್ಯಗಳನ್ನು ಅವುಗಳಿಗೆ ನೀಡಿ ತಯಾರು ಮಾಡಲಾಗುತ್ತದೆ.