ಬೆಂಗಳೂರಲ್ಲಿ ನಿನ್ನೆ ಯೋಗೇಶ್ವರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸವಾಲೆಸೆಯುವ ಸ್ವರದಲ್ಲಿ ಮಾತಾಡಿದ್ದರು. ಅವರ ಮಾತಿನ ಧಾಟಿ ಗಮನಿಸಿದರೆ, ಕಾಂಗ್ರೆಸ್ ಪಕ್ಷದೊಂದಿಗೆ ಅವರು ಮಾತುಕತೆ ನಡೆಸಿರುವ ಅನುಮಾನ ಸೃಷ್ಟಿಯಾಗಿತ್ತು. ಆದರೆ ಶಿವಕುಮಾರ್ ಅಂಥ ಸುಳಿವು ನೀಡಲಿಲ್ಲ.