ಈ ಪ್ರಶ್ನೆಗೆ ಪರಮೇಶ್ವರ್ ಅವರು ಉತ್ತರಿಸಬೇಕು. ನಿಮ್ಮಿಂದ ಅಥವಾ ನಿಮ್ಮ ಸರ್ಕಾರದಿಂದ ಈಡೇರಿಸಲಾಗದ ಆಶ್ವಾಸನೆಗಳನ್ನು ಗಂಗಮ್ಮನಂಥ ಅಮಾಯಕರಿಗೆ ಯಾಕೆ ನೀಡುತ್ತೀರಿ? ನಿಮ್ಮ ಮಾತು ನಂಬಿಕೊಂಡ ಇವರ ಕುಟುಂಬ ಇವತ್ತು ಒಂದ್ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದೆ. ಅವರ ಮೊರೆ ನಿಮ್ಮ ಶ್ರವಣದೋಶದ ಕಿವಿಗಳಿಗೆ ಯಾವತ್ತಾದರೂ ಬಿದ್ದಿತೇ?