ಈಶ್ವರ್ ಖಂಡ್ರೆ, ಅರಣ್ಯ ಸಚಿವ

ಚಲನಚಿತ್ರ ನಟರಾದ ಜಗ್ಗೇಶ್, ದರ್ಶನ್ ಮೊದಲಾದ ಸೆಲಿಬ್ರಿಟಿಗಳು ಹುಲಿಯುಗುರುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದೇ ಅಂತ ಕೇಳಿದ ಪ್ರಶ್ನೆಗೆ, ನಾಡಿನ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ, ಅದರ ಮುಂದೆ ಯಾರೂ ದೊಡ್ಡವರು ಚಿಕ್ಕವರಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.