Karnataka Assembly Winter Session 2023: ಇದು ಕಳವಳಕಾರಿ ಸಂಗತಿಯಲ್ಲದೆ ಮತ್ತೇನೂ ಅಲ್ಲ. ವಿಧಾನ ಮಂಡಲದ ಅಧಿವೇಶನ ಶಾಸಕರು ಮಂತ್ರಿಗಳ ಪಿಕ್ನಿಕ್ ಗಾಗಿ ನಡೆಸಲಾಗುವುದಿಲ್ಲ. ಅಧಿವೇಶನ ಜಾರಿಯಲ್ಲಿರುವಾಗ ಮಂತ್ರಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಉಪಸ್ಥಿತರಿರಬೇಕು. ಜನ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರೋದು ಅವರೇ ತಾನೇ? ವಿರೋಧ ಪಕ್ಷದ ನಾಯಕರನ್ನು ಎದುರಿಸಲು ಮಂತ್ರಗಳಿಗೆ ಹೆದರಿಕೆಯಾಗುತ್ತಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವರಿಗೆ ತಾಕೀತು ಮಾಡುವ ಅವಶ್ಯಕತೆಯಿದೆ.