ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕು, ನೀವೇ ಅತ್ಯಂತ ಸೂಕ್ತ ಮತ್ತು ಪ್ರಬಲ ಕ್ಯಾಂಡಿಡೇಟ್ ಅಂತ ತನ್ನ ಮುಂದೆ ಹೇಳಿ ಬೇರೆಯವರೊಂದಿಗೆ ಮಾತಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದವರು ನೀತಿಗೆಟ್ಟವರು ಅಂತ ಹೇಳುತ್ತಾರೆ. ಇವರ ಭಂಡತನ ಮತ್ತು ನಯವಂಚಕತೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಯಾಕೆ ಸ್ವಾಮಿ ನಮಗೆ ಆತ್ಮಗೌರವ ಇಲ್ಲವೇ ಅಂತ ಪ್ರಶ್ನಿಸಿದ್ದೇನೆ ಅಂತ ಶಿವಲಿಂಗೇಗೌಡ ಹೇಳಿದರು.