ದರ್ಶನ್ ನೋಡಲು ಸೋನಲ್ ಯಾಕೆ ಬರಲಿಲ್ಲ? ಉತ್ತರ ನೀಡಿದ ತರುಣ್ ಸುಧೀರ್

ನಿರ್ದೇಶಕ ತರುಣ್​ ಸುಧೀರ್​ ಅವರು ಸದ್ಯದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ನಟಿ ಸೋನಲ್​ ಮಾಂಥೆರೋ ಜೊತೆ ಅವರ ಮದುವೆ ನಡೆಯಲಿದೆ. ಆದರೆ ಇವರ ಮದುವೆಗೆ ನಟ ದರ್ಶನ್​ ಬರುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ಯಾಕೆಂದರೆ, ದರ್ಶನ್​ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆಗಸ್ಟ್​ 1ರ ತನಕ ದರ್ಶನ್​ ಅವರ ನ್ಯಾಯಾಂಗ ಬಂಧನದ ಅವಧಿ ಮುಂದುವರಿಯಲಿದೆ. ಆ ಬಳಿಕವೂ ಜಾಮೀನು ಸಿಗುವುದು ಸುಲಭವಿಲ್ಲ. ತರುಣ್​ ಸುಧೀರ್​ ಅವರು ಇಂದು (ಜುಲೈ 19) ಜೈಲಿಗೆ ತೆರಳಿ ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೋನಲ್ ಮಾಂಥೆರೋ ಬಂದಿಲ್ಲ. ಯಾಕೆ ಎಂಬುದಕ್ಕೆ ತರುಣ್​ ಉತ್ತರಿಸಿದ್ದಾರೆ. ‘ಅನುಮತಿ ಇದ್ದಿದ್ದು 5 ಜನರಿಗೆ ಮಾತ್ರ. ಹಾಗಾಗಿ ನಾವು ಮಾತ್ರ ಬಂದಿದ್ದೇವೆ. 2 ವಾರದಿಂದ ನಾನು ಪ್ರಯತ್ನಿಸುತ್ತಿದ್ದೆ. ಮೊದಲು ಕುಟುಂಬದವರ ಭೇಟಿ ಆಗಬೇಕಿತ್ತು. ನನಗೆ ಇಂದು ಅವಕಾಶ ಸಿಕ್ಕಿತು’ ಎಂದು ತರುಣ್ ಸುಧೀರ್​ ಹೇಳಿದ್ದಾರೆ.