ಯತ್ನಾಳ್ ಅವರು ಹೇಳುತ್ತಿರುವ ಮಾತಿನಿಂದ ಪಕ್ಷದ ವರಿಷ್ಠರು ಈ ಬಾರಿಯೂ ಭೇಟಿಯಾಗುವ ಸಮಯಾವಕಾಶ ನೀಡಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಯತ್ನಾಳ್ ಅವರ ಮುಖದಲ್ಲಿ ನಿರಾಶೆಯ ಅಂಶವನ್ನು ನೋಡಬಹುದು. ಪಕ್ಷದ ಹಿರಿಯ ಮುಖಂಡರು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ರಾಜ್ಯದ ಎಲ್ಲ ನಾಯಕರೊಂದಿಗೆ ಚರ್ಚೆಯನ್ನು ಮಾಡಿ ಒಂದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬ ಸಂದೇಶ ತಮಗೆ ಸಿಕ್ಕಿದೆ ಎಂದು ಯತ್ನಾಳ್ ಹೇಳಿದರು.