ಡಿಕೆ ಶಿವಕುಮಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಹಾವು ಮುಂಗುಸಿ ಸಂಬಂಧವಿದೆ. ಉಪ ಮುಖ್ಯಮಂತ್ರಿ ಇವತ್ತು ಸದನದಲ್ಲಿರಲಿಲ್ಲ, ಆದರೆ ಯತ್ನಾಳ್ ಮಾತಾಡಿದ್ದನ್ನು ಟಿವಿಯಲ್ಲಿ ನೋಡಿರುತ್ತಾರೆ ಇಲ್ಲವೇ ರಾತ್ರಿ ನೋಡುತ್ತಾರೆ. ಉಪ ಮುಖ್ಯಮಂತ್ರಿಯನ್ನು ಕೆಣಕಲೆಂದೇ ಯತ್ನಾಳ್ ಇಂದು ಸದನದಲ್ಲಿ ಹಾಗೆ ಮಾತಾಡಿದ್ದು. ಆದರೆ, ಸೀಸನ್ಡ್ ಪೊಲಿಟಿಶಿಯನ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಯತ್ನಾಳ್ ಮಾತಿನ ಮರ್ಮ ಅರಿಯರೇ?