ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದ ಸವದಿ ತಮ್ಮ ಮಾತು ಮುಂದುವರಿಸುತ್ತಾ, ವಿಧೇಯಕನ್ನು ಪಾಸು ಮಾಡುವುದು ಬಿಡುವುದು ಸದನಕ್ಕೆ ಬಿಟ್ಟ ಅಂಶವಾಗಿದೆ, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಂಶದಲ್ಲಿ ಪಕ್ಷಪಾತ ಮಾಡುವ ಮನೋಭಾವ ತನ್ನದಲ್ಲ, ಸಾಮಾಜಿಕ ನ್ಯಾಯದ ಕಳಕಳಿಯನ್ನು ವಿಧೇಯಕದಲ್ಲಿ ನೋಡಬಹದು, ಅದನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.