ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಮುಗಿಲುಮುಟ್ಟಿದ್ದು, ಭಕ್ತಸಾಗರವೇ ನಾಡ ಅಧಿದೇವತೆಯ ದರ್ಶನಕ್ಕೆ ಹರಿದುಬಂದಿದೆ. ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ದರ್ಶನ ಸಂಬಂಧಿತ ವಿವರಗಳು ಹಾಗೂ ಆಷಾಢ ಶುಕ್ರವಾರ ಶಕ್ತಿದೇವತೆಯ ಪೂಜೆಯ ಮಹತ್ವವೇನು ಎಂಬುದರ ವಿವರ ಇಲ್ಲಿದೆ.