ಚುನಾವಣಾ ತರಬೇತಿ ವೇಳೆ ಅವ್ಯವಸ್ಥೆ ಆರೋಪ

ಲೋಕಸಭಾ ಚುನಾವಣಾ ತರಬೇತಿಗೆಂದು 2,500 ಜನರನ್ನು ಸೇರಿಸಿದ್ದು, ಆದರೆ ಕಾರ್ಯಾಗಾರದಲ್ಲಿ ನೀರು, ಊಟ ಕೊಟ್ಟಿಲ್ಲ. ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲ ಅಂತಾ ಸರ್ಕಾರಿ ನೌಕರರು ಆರೋಪ ಮಾಡಿದ್ದಾರೆ. ಆರ್.ಆರ್.ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಚುನಾವಣಾ ತರಬೇತಿ ಕಾರ್ಯಾಗಾರ ವೇಳೆ ಘಟನೆ ಸಂಭವಿಸಿದೆ. ಈ ವೇಳೆ ಚುನಾವಣಾಧಿಕಾರಿ ಮತ್ತು ಸರ್ಕಾರಿ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ.