ಅಹಮದಾಬಾದ್​ ನಲ್ಲಿ ಏಐಸಿಸಿ ಅಧಿವೇಶನ

ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅಧಿವೇಶನಕ್ಕೆ ನ್ಯಾಯ್ ಪಥ್ ಅಂತ ಹೆಸರಿಡಲಾಗಿದ್ದು, ಸಂಕಲ್ಪ, ಸಮರ್ಪಣೆ ಮತ್ತು ಸಂಘರ್ಷ ಟ್ಯಾಗ್​​ಲೈನ್ ಅಗಿದೆ. ಪಕ್ಷದ ಬಲವರ್ಧನೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವುದು, ಚುನಾವಣೆಗಳನ್ನು ನಿರ್ವಹಿಸುವ ಬಗೆ, ಮಾಧ್ಯಮಗಳ ಜೊತೆ ವರ್ತನೆ, ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆ ನಿರ್ವಹಿಸುವುದು ಮತ್ತು ಹೊಸ ಪದಾಧಿಕಾರಿಗಳಿಗೆ ಪಕ್ಷದ ತತ್ವ ಸಿದ್ಧಾಂತಗಳ ತರಬೇತಿ-ಮೊದಲಾದವುಗಳು ಅಧಿವೇಶನದ ಅಜೆಂಡಾ ಆಗಿವೆ.