ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿಖಿಲ್ ಜಾಣ್ಮೆಯ ಉತ್ತರ ನೀಡಿದರು. ಜೆಡಿಎಸ್ ಪಕ್ಷದ ಗಮನ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಮೇಲಿದೆ ಕೇವಲ ಮಂಡ್ಯದ ಮೇಲೆ ಮಾತ್ರ ಇಲ್ಲ ಎಂದು ನಿಖಿಲ್ ಹೇಳಿದಾಗ ನೀವು ಮಂಡ್ಯದಿಂದ ಸ್ಪರ್ಧೆ ಮಾಡ್ತೀರಾ ಅಂತ ಮಾಧ್ಯಮದವರು ಕೇಳಿದರು. ತಾನು ಸ್ಪರ್ಧಿಸಲ್ಲ ಮತ್ತು ಆಕಾಂಕ್ಷಿಯೂ ಅಲ್ಲ, ಸದ್ಯಕ್ಕಂತೂ ಆ ಯೋಚನೆ ಇಲ್ಲ ಎಂದು ನಿಖಿಲ್ ಹೇಳಿದರು.