ಕಾವೇರಿ ನಮ್ಮದು, ಕಾವೇರಿ ನೀರು ನಮ್ಮದು, ಅಯ್ಯಯ್ಯೋ ಅನ್ಯಾಯ ಅಂತ ಘೋಷಣೆಗಳನ್ನು ಕೂಗುತ್ತಾ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬರಿಮೈಯಲ್ಲಿರುವ ಹಿರಿಯ ಹೋರಾಟಗಾರರೊಬ್ಬರು ಕೈಯಲ್ಲೊಂದು ಪಾತ್ರೆ ಹಿಡಿದು ರಸ್ತೆಯಲ್ಲಿ ಉರುಳುತ್ತಾ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.