ಗೃಹ ಸಚಿವ ಜಿ ಪರಮೇಶ್ವರ್

ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದೆ, ಇಲ್ಲ ಅಂತೇನಿಲ್ಲ, ದಲಿತ ನಾಯಕರು ಒಂದೆಡೆ ಸಭೆ ಸೇರಿ ಊಟ ಮಾಡುವಂಥ ಚಿಕ್ಕ ವಿಷಯ ಹೈಕಮಾಂಡ್ ಗೊತ್ತಾಗುವಾಗ ಇಂಥ ದೊಡ್ಡ ವಿಷಯ ಗೊತ್ತಾಗದಿರುತ್ತದೆಯೇ ಎಂದು ಪರಮೇಶ್ವರ್ ಕೇಳಿದರು. ತಾನು ಕರೆದಿದ್ದ ಸಭೆಯನ್ನು ಹೈಕಮಂಡ್ ರದ್ದು ಮಾಡಿದ ಬೇಸರ ಇನ್ನೂ ಅವರಲ್ಲಿರೋದು ಸ್ಪಷ್ಟ.