ಕಾವೇರಿ ನದಿಯು ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲೂ ಹರಿದು ಹೋಗುವುದರಿಂದ ಈ ರಾಜ್ಯಗಳ ಜನ ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ, ಸುಮಾರು 10,000 ಜನ ಕೂತು ವೀಕ್ಷಿಸಲು ಸಾಧ್ಯವಾಗುವ ಹಾಗೆ ಗ್ಯಾಲರಿಯನ್ನು ವಿನ್ಯಾಸಗೊಳಿಸಲಾಗುತ್ತಿದೆ, ಭಾವೈಕ್ಯತೆಯ ಹಾಡೊಂದನ್ನು ರಚಿಸಲು ಅರ್ಜುನ್ ಜನ್ಯಾ ಮತ್ತು ಹಂಸಲೇಖಾ ಅವರನ್ನು ಕೋರಲಾಗಿದೆ ಎಂದು ಶಿವಕುಮಾರ್ ಹೇಳಿದರು.