ತನ್ನ ಮೇಲೆ ದೆಹಲಿಗೆ ಬರುವಂತೆ ಒತ್ತಡ ಹೇರಲಾಗಿತ್ತು, ಆದರೆ ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು. ಜೆಡಿಎಸ್ ಪಕ್ಷದ 19 ಶಾಸಕರಲ್ಲಿ ಯಾರೂ ಕಾಂಗ್ರೆಸ್ ಸೇರುತ್ತಿಲ್ಲ, ಇಷ್ಟರಲ್ಲೇ ಎಲ್ಲ 19 ಶಾಸಕರನ್ನು ಒಂದೇ ವೇದಿಕೆ ಮೇಲೆ ಕೂರಿಸಿ ಒಂದು ಕಾರ್ಯಕ್ರಮದ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.