ಒಂದೇ ದಿನದಲ್ಲಿ ನರಕವಾಯ್ತು ಪ್ರವಾಸಿಗರ ಸ್ವರ್ಗ ವಯನಾಡು

ಕೇರಳದ ವಯನಾಡಿನಲ್ಲಿ ಉಂಟಾಗಿರುವ ಪ್ರವಾಹ, ಭೂಕುಸಿತದಲ್ಲಿ ಸಿಲುಕಿರುವವರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ನೂರಾರು ಕುಟುಂಬಗಳು ಕೊಚ್ಚಿಹೋಗಿದ್ದು, ಮೃತದೇಹಗಳನ್ನು ಪತ್ತೆಹಚ್ಚಲು ಕೂಡ ಕೆಲವು ಕುಟುಂಬಗಳಲ್ಲಿ ಯಾರೂ ಬದುಕುಳಿದಿಲ್ಲ. ಪ್ರವಾಸಿಗರ ಪಾಲಿನ ಸ್ವರ್ಗವಾಗಿದ್ದ ವಯನಾಡು ಸಂಪೂರ್ಣ ಕೊಚ್ಚಿಹೋಗಿ ಹೆಣಗಳಿಂದ ಆವೃತವಾದ ನರಕದಂತೆ ಕಾಣುತ್ತಿದೆ.