ಸಂಸದ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಮಾತಿನ ಧಾಟಿ ಗಮನಿಸಿದರೆ, ಈ ಬಾರಿಯೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಅವರಿಗೆ ಸಿಗುವಂತಿದೆ. ಆದರೆ, ಕ್ಷೇತ್ರದ ಕಾರ್ಯಕರ್ತರು ಬೇರೆ ಅಭಿಪ್ರಾಯ ಹೊಂದಿರುವುದು ಮೂಲಗಳಿಂದ ಗೊತ್ತಾಗಿದೆ. ಮತ್ತೊಂದು ಮೂಲದ ಪ್ರಕಾರ ರಾಜ್ಯದ 26 ಬಿಜೆಪಿ ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ 2024 ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಸ್ಮೋಕ್ ಕ್ಯಾನಿಸ್ಟರ್ ಗಳನ್ನು ಸಂಸತ್ ಭವನಕ್ಕೆ ಒಯ್ದು ದೊಂಬಿಯೆಬ್ಬಿಸಿದ ಯುವಕರಿಗೆ ಪ್ರತಾಪ್ ಸಿಂಹ ಹೆಸರಲ್ಲಿ ಪಾಸು ಸಿಕ್ಕ ವಿಷಯ ಬೆಳಕಿಗೆ ಬಂದ ಬಳಿಕ ವರಿಷ್ಠರು ಅಸಮಾಧಾನಗೊಂಡಿದ್ದೂ ನಿಜ.