ಠಾಣೆಗೂ ಕರೆಂಟ್ ಕಟ್ ಶಾಕ್, ಫೋನ್​ ಟಾರ್ಚ್​​​ನಲ್ಲಿ ಪೊಲೀಸರಿಂದ ಕರ್ತವ್ಯ ನಿರ್ವಹಣೆ

ನೊಂದವರು ದೂರು ಕೊಡೋಕ್ಕೆ ಅಂತ ಪೊಲೀಸ್ ಠಾಣೆಗೆ ಸಂಜೆ ವೇಳೆ ಹೋದ್ರೆ ಮೊಬೈಲ್ ನಲ್ಲಿ ಟಾರ್ಚ್ ಹಾಕಿಕೊಂಡು ದೂರು ನೀಡಲು ನಿಲ್ಲುವಂತಹ ದುಃಸ್ಥಿತಿ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಟಾರ್ಚ್ ಹಾಕ್ಕೊಂಡು ನಿಲ್ಲುವ ಸ್ಥಿತಿ ಎದುರಾಗಿದೆ.