ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಡಳಿತ ವಿರೋಧ ಅಲೆ ಎದ್ದಿದ್ದು, ಸ್ವಪಕ್ಷದ ಕಾರ್ಯಕರ್ತರೇ ಹೊಸ ಮುಖವನ್ನು ಬಯಸಿದ್ದಾರೆ. ಹತ್ತೂರಿಗೆ ಅರುಣ್ ಕುಮಾರ್ ಪುತ್ತಿಲ ಎಂದು ಹೇಳಲಾಗುತ್ತಿದೆ. ಈ ನಡುವೆ ಕಟೀಲ್ ಅವರು ಭಾವುಕವಾಗಿ ಮಾತನಾಡುತ್ತಲೇ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.