ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂದರ್ಭ ಎದುರಾದರೆ ನೀವೂ ಸಹ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರೇ ಎಂದು ಕೇಳಿದ ಪ್ರಶ್ನೆಗೂ ಪರಮೇಶ್ವರ್ ರೇಗಿದರು. ಅಂಥ ಸಂದರ್ಭವೇ ಉದ್ಭವಿಸಲ್ಲ, ಒಂದು ವೇಳೆ ಅಂತ ಯಾಕೆ ಹೇಳುತ್ತೀರಿ? ಅಂಥ ಸ್ಥಿತಿ ಬಂದಾಗ ನೋಡೋಣ, ಈಗಂತೂ ಆದರ ಬಗ್ಗೆ ಯೋಚನೆ ಮಾಡುವ ಅವಶ್ಯಕತೆಯಿಲ್ಲ ಎಂದು ಪರಮೇಶ್ವರ್ ಹೇಳಿದರು.