ಚುನಾವಣೆಯಲ್ಲಿ 6.20 ಲಕ್ಷಕ್ಕಿಂತ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ, ಅಷ್ಟು ಜನರನ್ನು ತಾನು ಭೇಟಿಯಾಗಿಲ್ಲವಾದರೂ ಅವರು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಅನನ್ಯವಾದದ್ದು ಅವರಿಗೆ ತಾನು ಚಿರಋಣಿಯಾಗಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಪುತ್ರಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ಪತಿ, ತಾಯಿ ಮತ್ತು ತಂಗಿಯನ್ನು ಸಹ ಅವರು ನೆನೆದರು.