ಜಿಟಿ ದೇವೇಗೌಡ, ಜೆಡಿಎಸ್-ಶಾಸಕ

ಬೆಂಗಳೂರಲ್ಲಿ ರೈತ ಮತ್ತು ವಿವಿಧ ಸಂಘಟನೆಗಳು ಶಾಂತಿಯುತವಾಗಿ ಬಂದ್ ಆಚರಿಸುತ್ತಿದ್ದಾಗ 144 ಸೆಕ್ಷನ್ ಹೇರಿ ರೈತರನ್ನು ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದ ಅವರ ಮೇಲೆ ಗೋಲಿಬಾರ್ ನಡೆಸಿದ್ದ ಸರಕಾರ ಬಿದ್ದು ಹೋಗಿತ್ತು. ಈವತ್ತು ಈ ಸರ್ಕಾರ 144 ಸೆಕ್ಷನ್ ಹೇರಿ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ, ಈ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ದೇವೇಗೌಡ ಹೇಳಿದರು.