ಆರ್ ಅಶೋಕ, ವಿರೋಧ ಪಕ್ಷದ ನಾಯಕ

ನಿನ್ನೆ ತಮ್ಮ ಪಕ್ಷದ ಎಮ್ಮೆಲ್ಸಿಯಾಗಿರುವ ಹೆಚ್ ವಿಶ್ವನಾಥ ಅವರು ಆರ್ ಅಶೋಕ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಶೋಕ ಯಾವುದಕ್ಕೂ ಉತ್ತರಿಸಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ಅಶೋಕ ಠೇವಣಿ ಕಳೆದುಕೊಂಡಿದ್ದರು. ಆದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ಸೋತಿದ್ದನ್ನು ದೊಡ್ಡ ಅವಮಾನವೆಂಬಂತೆ ಚಿತ್ರಿಸುತ್ತಾರೆ. ಶಿವಕುಮಾರ್ ಮತ್ತು ಸುರೇಶ್ ಇಬ್ಬರು ಕ್ರೀಡಾಮನೋಭಾವದಿಂದ ಸೋಲು ಅಂಗೀಕರಿಸಿದ್ದಾರೆ.