ಹಿಂದೆಯೂ ಇದೇ ರೀತಿ ಜೆಡಿಎಸ್ ಪಕ್ಷವನ್ನು ಕಡೆಗಣಿಸಿದಾಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅದರೆ ಬಿಜೆಪಿ ವರಿಷ್ಠರು ಅವರ ಮನವೊಲಿಸಿದ್ದರು. ಬಿಜೆಪಿ ನಡೆಸುವ ಅಹೋರಾತ್ರಿ ಧರಣಿ ಮತ್ತು ಏಪ್ರಿಲ್ 7 ರಂದು ರಾಜ್ಯದಾದ್ಯಂತ ನಡೆಯುವ ಪ್ರತಿಭಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಹೇಳಿದ ಸುರೇಶ್, ತಮ್ಮ ಪಕ್ಷವನ್ನು ಹೀಗೆ ಕಡೆಗಣಿಸಿದರೆ ಬಿಜೆಪಿಗೆ ಕಷ್ಟವಿದೆ ಎಂದರು.