ಸ್ಪೀಕರ್ ಅಯ್ತು ಆಯ್ತು ಅನ್ನುತ್ತಿದ್ದರೆ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಮತ್ತು ಕಾಮತ್ ನಡುವೆ ಜೋರು ಜಟಾಪಟಿ ಶುರುವಾಗುತ್ತದೆ, ಎದೆ ತಟ್ಟುವುದು ತೊಡೆ ತಟ್ಟೋದು ನಡೆಯುತ್ತದೆ. ಕಾಮತ್ ಪರವಾಗಿ ಕೆಲವರು, ಸ್ವಾಮಿ ಪರವಾಗು ಕೆಲವರು ಜೋರು ಜೋರು ಸ್ವರದಲ್ಲಿ ಮಾತಾಡಲಾರಂಭಿಸಿದಾಗ ಸದನದಲ್ಲಿ ಗಲಾಟೆ ಹೆಚ್ಚುತ್ತದೆ. ಸ್ಪೀಕರ್ ಸುಮ್ಮನಿರಿ, ಕೂತ್ಕೊಳ್ಳಿ ಅಂತ ಹೇಳೋದು ಅರಣ್ಯರೋದನವೆನಿಸುತ್ತದೆ.