ಬಾಪೂಜಿನಗರದ ಎಲ್ಲ ನಿವಾಸಿಗಳು ಹೇಳುವ ಪ್ರಕಾರ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದಾಗಿನಿಂದ ಸಮಸ್ಯೆಗಳು ಉಲ್ಬಣಗೊಂಡಿವೆ. ರಸ್ತೆಗಳ ಅಗಲೀಕರಣದ ನೆಪದಲ್ಲಿ ಮೊದಲಿದ್ದ ರಸ್ತೆಗಳನ್ನು ಕಂಡಕಂಡಲ್ಲಿ ಅಗೆದಿರುವುದರಿಂದ ಮಣ್ಣ್ಣೆಲ್ಲ ಚರಂಡಿ ಸೇರಿದೆ ಮತ್ತು ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳು ಎಂದು ಒಬ್ಬ ಹಿರಿಯರು ಹೇಳುತ್ತಾರೆ.