ನಟ ದರ್ಶನ್ ಅವರು ‘ಕಾಟೇರ’ ಸಿನಿಮಾದಿಂದ ಭರ್ಜರಿ ಯಶಸ್ಸು ಕಂಡರು. ಅವರ ಜೊತೆಗೆ ಚಿತ್ರತಂಡದಲ್ಲಿ ಕೆಲಸ ಮಾಡಿದ ಅನೇಕರಿಗೆ ಗೆಲುವು ಸಿಕ್ಕಿತು. ಈ ಸಿನಿಮಾದ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರ ಬೆನ್ನುತಟ್ಟುವ ಕೆಲಸ ಇಂದು ಆಗಿದೆ. ಹೌದು, ಕಥೆ ಬರೆದ ಜಡೇಶ್ ಕುಮಾರ್, ಸಂಭಾಷಣೆ ಬರೆದ ಮಾಸ್ತಿ ಹಾಗೂ ನಟ ಸೂರಜ್ ಅವರಿಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಹೊಸ ಕಾರು ಕೊಡಿಸಿದ್ದಾರೆ. ಇಂದು (ಮೇ 2) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಂತರ ಈ ಮೂವರಿಗೆ ಕಾರು ಗಿಫ್ಟ್ ನೀಡಲಾಯಿತು. ಮಾಸ್ತಿ, ಜಡೇಶ್ ಮತ್ತು ಸೂರಜ್ ಅವರ ಹೊಸ ಕಾರನ್ನು ದರ್ಶನ್ ಅವರು ಸ್ಟಾರ್ಟ್ ಮಾಡಿದ್ದಾರೆ. ಕೈ ನೋವಿನ ನಡುವೆಯೂ ಅವರು ಕಾರು ಆನ್ ಮಾಡಿ ಶುಭ ಕೋರಿದ್ದಾರೆ. 2023ರ ಡಿಸೆಂಬರ್ 29ರಂದು ಬಿಡುಗಡೆ ಆದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಆ ಸಂಭ್ರಮವನ್ನು ಈ ರೀತಿಯಲ್ಲಿ ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಹಾಜರಿದ್ದರು.