ಸದನದಲ್ಲಿ ಮಾತಿನ ಕದನ

ಅಧಿವೇಶನ ಶುರುವಾಗುವ ಮೊದಲು ವಿಪಕ್ಷ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕುವುದಾಗಿ ಹೇಳಿದ್ದರು. ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣ ಅವರಿಗೆ ಭಾರೀ ಅಸ್ತ್ರವಾಗಿ ಲಭ್ಯವಾಗಿತ್ತು. ಆದರೆ ಅಧಿವೇಶನದ ಕೊನೆಯ ದಿನ ಅದನ್ನು ಚರ್ಚೆಗೆ ತರುವ ಮೂಲಕ ತಾವು ಸದನದ ಹೊರಗೆ ಬಡಾಯಿ ಕೊಚ್ಚಿಕೊಂಡಿದ್ದು ಅನ್ನೋದನ್ನು ಸಾಬೀತು ಮಾಡಿದ್ದಾರೆ.