‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಶೋ ನಡೆಸಿಕೊಡುವ ರೀತಿ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್​ ಆಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಎಲ್ಲರನ್ನೂ ನಗಿಸುತ್ತಾ ಭರ್ಜರಿ ಮನರಂಜನೆ ನೀಡುತ್ತಾರೆ. ಈ ಶನಿವಾರದ ಎಪಿಸೋಡ್​ ಸಖತ್​ ಖಡಕ್​ ಆಗಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಹೆಚ್ಚು ಫನ್​ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಎಲ್ಲ ಸ್ಪರ್ಧಿಗಳಲ್ಲೂ ಒಂದೊಂದು ಇಂಟರೆಸ್ಟಿಂಗ್​ ಕಥೆ ಇದೆ. ಅದನ್ನು ಮೂವೀ ಮಾಡಿದರೆ ವರ್ಕ್​ ಆಗತ್ತೆ’ ಎಂದು ಹೇಳುವ ಮೂಲಕ ಸುದೀಪ್​ ಅವರು ಕೆಲವು ಪೋಸ್ಟರ್​ಗಳನ್ನು ತೋರಿಸಿದ್ದಾರೆ. ‘ಪಾಪ್ರೆಡ್ಡಿ ಪಾಳ್ಯ’, ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’, ‘ಬೆಂಕಿಯ ಬಲೆ’ ಇತ್ಯಾದಿ ಸಿನಿಮಾಗಳ ಪೋಸ್ಟರ್​ ತೋರಿಸಲಾಗಿದೆ. ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’ ಸಿನಿಮಾಗೆ ತುಕಾಲಿ ಸಂತೋಷ್​ ಹೀರೋ ಆಗಿದ್ದು, ಅವರಿಗೆ ಭಾಗ್ಯಶ್ರೀ ಮತ್ತು ಸಿರಿ ಹೀರೋಯಿನ್​ ಆಗಿರುವ ರೀತಿಯಲ್ಲಿ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ.