ಕಾಂಗ್ರೆಸ್ ಮುಸಲ್ಮಾನರ ಪಕ್ಷ ಅದು ಹಿಂದೂಗಳ ಪಕ್ಷ ಅಲ್ಲವೇ ಅಲ್ಲ, ಹಾಗಾಗಿ ತಾನು ಆ ಪಕ್ಷ ಸೇರುವ ಮಾತೇ ಉದ್ಭವಿಸಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು. ಜೈಲಿಗೆ ಹೋದ ಒಬ್ಬ ಮುಖ್ಯಮಂತ್ರಿ ಮತ್ತು ಅವರ ಮಗನ ಮಾತು ಕೇಳಿಕೊಂಡು ಬಿಜೆಪಿಯ ವರಿಷ್ಠರು ತನ್ನನ್ನು ಪಕ್ಷದಿಂದ ಉಚ್ಚಾಟಿಸುತ್ತಾರೆಂದರೆ ರಾಜ್ಯ ಬಿಜೆಪಿ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸಿಗೆ ಕೊಟ್ಟಿರುವಂತಿದೆ ಅಂತ ಯತ್ನಾಳ್ ಹೇಳಿದರು.