ಪಕ್ಷದ ಕೆಲ ಆಂತರಿಕ ವಿದ್ಯಮಾನಗಳ ಹೊರಹಾಕುವ ಅವರು ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡಿದ ಟಿ ಎ ಸರವಣಗೆ ದೇವೇಗೌಡರು ನೀಡಿದ್ದೇನು ಅಂತ ಪ್ರಶ್ನಿಸಿ ಕುಪೇಂದ್ರ ರೆಡ್ಡಿಯನ್ನು ರಾಜ್ಯಸಭಾ ಸದಸ್ಯನಾಗಿ ಯಾಕೆ ನೇಮಕ ಮಾಡಿದ್ದು ಅಂತ ತನಗೆ ಚೆನ್ನಾಗಿ ಗೊತ್ತಿದೆ ಅನ್ನುತ್ತಾರೆ. ತಮ್ಮ ವಿರುದ್ಧ ಜಾರಿಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ಸು ತೆಗೆದುಕೊಳ್ಳದಿದ್ದರೆ ಎಲ್ಲವನ್ನೂ ಬಹಿರಂಗಪಡಿಸುವ ಬೆದರಿಕೆಯನ್ನ ದೇವೇಗೌಡರಿಗೆ ಅವರು ಹಾಕುತ್ತಾರೆ.