ನೆರೆದಿದ್ದ ಸಾವಿರಾರು ಜನರಿಗೆ ವಂದಿಸಲು ಖರ್ಗೆ, ರಾಹುಲ್, ಸಿದ್ದರಾಮಯ್ಯ ಮತ್ತು ಶಿವಕುಮಾರ್ ವೇದಿಕೆಯ ಮುಂಭಾಗಕ್ಕೆ ಬಂದಾಗ ಉಳಿದ ಸಚಿವರಿಗೂ ಅವರೊಂದಿಗೆ ಕಾಣಿಸಿಕೊಳ್ಳುವ ತವಕ! ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಯಶ ಕಾಣುತ್ತಾರಾದರೂ ಪ್ರಮುಖ ನಾಲ್ವರು ಪರಸ್ಪರ ಕೈ ಹಿಡಿದಿಕೊಂಡು ಮೇಲೆತ್ತುವಾಗ ಅವರನ್ನು ಕಡೆಗಣಿಸಲಾಗುತ್ತದೆ. ಹೆಚ್ಚು ಅವಕೃಪಗೆ ಒಳಗಾಗೋದು ಬೇಡ ಅಂದುಕೊಳ್ಳುವ ಚಲುವರಾಯಸ್ವಾಮಿ, ತಮ್ಮ ಹಿಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುಂದೆ ಬರುವಂತೆ ಹೇಳುತ್ತಾರೆ