ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಮೈತ್ರಿಯ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದರು. ಅವರನ್ನು ಕುರಿತು ಕೇಳಿದ ಪ್ರಶ್ನೆಗೆ ಗೌಡರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರೆಮ್ಮನವರೇ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿರುತ್ತಾರೆ. ಈ ಬಾರಿ ಅವರಿಗೆ ಮತ ನೀಡಿದವರು ಮುಂದಿನ ಬಾರಿಯೂ ನೀಡುತ್ತಾರೆ ಮತ್ತು ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಈ ಬಾರಿ ಪಡೆದ ವೋಟುಗಳ ಶೇಕಡ 50ರಷ್ಟು ಮಾತ್ರ ಕರೆಮ್ಮನವರಿಗೆ ಸಿಕ್ಕರೂ ಸಾಕ, ಅವರು ಅನಾಯಸವಾಗಿ ಗೆಲ್ಲುತ್ತಾರೆ ಎಂದು ಹೇಳಿದರು.