‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ

ಸಮಯ ಬಂದಾಗ ಧನರಾಜ್​ ಅವರು ಉಗ್ರ ರೂಪ ತಾಳುತ್ತಾರೆ. ಈಗ ಅವರು ಕ್ಯಾಪ್ಟನ್ ಮಂಜು ವಿರುದ್ಧ ಸಿಡಿದೇಳಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಹನುಮಂತ ತಡೆದಿದ್ದಾರೆ. ‘ಬಿಗ್ ಬಾಸ್... ನೀವು ರಾಜರಿಗೆ ಅಧಿಕಾರ ಕೊಟ್ಟಿದ್ದೀರಿ ಅಂತ ಸುಮ್ಮನಿದ್ದೀವಿ. ಇಲ್ಲ ಅಂದ್ರೆ ಸುಮ್ಮನಿರುವ ಮಗ ನಾನಲ್ಲ’ ಎಂದು ಧನರಾಜ್ ಹೇಳಿದ್ದಾರೆ. ‘ಇದೊಂದು ಸಲ ಹೊಟ್ಟೆಗೆ ಹಾಕಿಕೋ’ ಎಂದು ಹನುಮಂತ ಸಮಾಧಾನ ಮಾಡಿದ್ದಾರೆ. ನ.25ರಂದು ಈ ಸಂಚಿಕೆ ಪ್ರಸಾರ ಆಗಲಿದೆ.