ಅವರ ಸಾವಿನ ನಂತರ ಕುಟುಂಬಸ್ಥರು ಮತ್ತು ಸಮುದಾಯದ ಮುಖಂಡರು ಠಾಣೆಗೆ ಬಂದರು ಮತ್ತು ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ ಬಳಿಕ ಮನವರಿಕೆಯಾಗಿ ವಾಪಸ್ಸು ಹೋದರು ಎಂದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬಂದು ದಾಂಧಲೆ ನಡೆಸಿತು. ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಒಂದಷ್ಟು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ ಪಿ ಹೇಳಿದರು.