ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್

ಸುವರ್ಣ ಸೌಧದಲ್ಲಿ 11ನೇ ಬಾರಿಗೆ ವಿಧಾನ ಸಭಾ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೂ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಬಸನಗೌಡ ಯತ್ನಾಳ್ ಕಳವಳ ವ್ಯಕ್ತಪಡಿಸಿದರು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು, ಚರ್ಚೆಗಳಲ್ಲಿ ಹೆಚ್ಚಿನ ಆದ್ಯತೆ ಈ ಭಾಗದ ಸಮಸ್ಯೆಗಳಿಗೆ ನೀಡಬೇಕು ಅನ್ನೋದು ಕೇವಲ ಕಾಗದಗಳ ಮೇಲೆ ಮಾತ್ರ ಉಳಿದಿದೆ ಎಂದು ಅವರು ಹೇಳಿದರು.