ಬಿವೈ ವಿಜಯೇಂದ್ರ

ಘಟಾನುಘಟಿಗಳ ಹೆಸರು ಕೇಳಿಬರುತ್ತಿರುವುದು ನಿಜ, ಅದೇ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಬಿಜೆಪಿ ಆಗ್ರಹ ಮಾಡುತ್ತಿದೆ, ಅನ್ಯಾಯಕ್ಕೊಳಗಾಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಎಸ್ಐಟಿಯಿಂದ ಸಾಧ್ಯವಿಲ್ಲ, ಸಿಬಿಐ ತನಿಖೆ ನಡೆಸಿದರೆ ಅವರಿಗೆ ನ್ಯಾಯ ಸಿಗುವ ಜೊತೆಗೆ ಮುಚ್ಚಿಹೋಗುವ ಅಪಾಯದಲ್ಲಿರುವ ಎಲ್ಲ ಸಂಗತಿಗಳು ಹೊರಬೀಳಲಿವೆ ಎಂದು ವಿಜಯೇಂದ್ರ ಹೇಳಿದರು.