ಸಿಟಿ ರವಿ, ಹಿರಿಯ ಬಿಜೆಪಿ ನಾಯಕ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 21 ಶಂಕಿತ ಭಯೋತ್ಪಾದಕರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ ಎಂದು ಹೇಳಿದರು. ಹಿಂದೆ ಜೈನರ ಕಾಶಿ ಎಂದು ಕರೆಸಿಕೊಂಡಿದ್ದ ಭಟ್ಕಳ ಈಗ ಉಗ್ರರ ನೆಲೆಯಾಗಿದೆ. ಸಿಮಿ ಸಂಘಟನೆಯ ಮೇಲೆ ಎನ್ ಐಎ ದಾಳಿ ನಡೆಸಿದಾಗ ಘಜ್ವಾ-ಎ-ಹಿಂದ್ ಗೆ ಸಂಬಂಧಿಸಿದ ಕಾಗದಗಳು ಬರಾಮತ್ತಾಗಿದ್ದವು, ಇವೆಲ್ಲ ಸಂಗತಿಗಳನ್ನು ಗಮನಿಸಿದರೆ ಮತ್ತೊಂದು ಸರಣಿ ಬಾಂಬ್ ಸ್ಫೋಟಕ್ಕೆ ಪೂರ್ವ ಸಿದ್ಧತೆ ನಡೆದಿರುವ ಬಗ್ಗೆ ಅನುಮಾನ ಕಾಡದಿರದು ಎಂದು ರವಿ ಹೇಳಿದರು.