ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಲಿಂಗಾಯತ ಮಠಮಾನ್ಯಗಳಿವೆ ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅವು ನಿರ್ಣಾಯಕ ಅಂತ ಹೇಳಲಾಗದಿದ್ದರೂ ಮಹತ್ತರ ಪಾತ್ರ ನಿರ್ವಹಿಸುತ್ತವೆ. ಮಠಾಧೀಶರು ಹೇಳುವ ಮಾತನ್ನು ಮಠಗಳಿಗೆ ನಡೆದುಕೊಳ್ಳುವ ಜನ ಚಾಚೂತಪ್ಪದೆ ಪಾಲಿಸುತ್ತಾರೆ. ಇದು ಚತುರ ಮತ್ತು ಹಿರಿಯ ರಾಜಕಾರಣಿ ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತು.