ಸರಿಯಾದ ಸಮಯಕ್ಕೆ ಆಗಮಿಸಿದ್ದ ಬಸವರಾಜ ಹೊರಟ್ಟಿ ಮತ್ತು ನಾಗರಾಜ್ ಯಾದವ್ ಅರ್ಧಗಂಟೆಗೂ ಹೆಚ್ಚು ಸಮಯ ಮುಖ್ಯಮಂತ್ರಿ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದರು. ನಮ್ಮ ರಾಜ್ಯ ಮತ್ತು ದೇಶದಲ್ಲಿ ಗಣ್ಯರು ತಡವಾಗಿ ಬರೋದು ಹೊಸದೇನೂ ಅಲ್ಲ, ಆದರೆ ವಿಧಾನ ಪರಿಷತ್ ಚೇರ್ಮನ್ರನ್ನು ಕಾಯುವಂತೆ ಮಾಡಿದ್ದು ಸರಿಯಲ್ಲವೇನೋ.