ಬಸನಗೌಡ ಪಾಟೀಲ್ ಯತ್ನಾಳ್ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿದೆ ಅಂತ ಮಾಡುತ್ತಿರುವ ಆರೋಪಗಳಿಗೆ ವಿಜಯೇಂದ್ರ ಆಗಲೀ ಅಥವಾ ಆಗ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರಾಗಲೀ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ. ದಾವಣಗೆರೆಯಲ್ಲೂ ವಿಜಯೇಂದ್ರ ಅದನ್ನೇ ಮಾಡಿದರು, ಯತ್ನಾಳ್ ಅನ್ನುತ್ತಿದ್ದಂತೆಯೇ ನಿಂತ ಸ್ಥಳದಿಂದ ಕಾಲ್ಕೀಳಿದರು.