ನೇಹಾ ಓದುತ್ತಿದ್ದ ಕಾಲೇಜಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಅದಕ್ಕೆ ಮೂರು ಗೇಟ್ ಗಳಿವೆ, ಆಗುಂತಕರು ಒಳಬಂದರೂ ಯಾರೂ ಪ್ರಶ್ನಿಸುವುದಿಲ್ಲ ಎಂದು ಗೀತಾ ಹೇಳಿದರು. ಫಯಾಜ್ ನನ್ನು ಜೈಲಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ, ನೇಹಾಳನ್ನು ಕೊಂದ ಹಾಗೆಯೇ ಅವನನ್ನೂ ಕೊಲ್ಲಬೇಕು, ಇಲ್ಲವಾದರೆ ಜನರ ಕೈಗೆ ಅವನನ್ನು ಒಪ್ಪಿಸಬೇಕು ಎಂದು ಗೀತಾ ಹಿರೇಮಥ ಕೋಪದಲ್ಲಿ ಹೇಳಿದರು.