ಬಿಎಸ್ ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕ

ರಾಜ್ಯ ಬಿಜೆಪಿ ಘಟಕ ಒಡೆದ ಮನೆಯಾಗಿರುವ ವಿಷಯ ಎಲ್ಲ ಕನ್ನಡಿಗರಿಗೆ ಗೊತ್ತಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಸದನದಲ್ಲಿ ಮಾತಾಡುತ್ತಿರುವಾಗಲೇ ಹಿರಿಯ ಸದಸ್ಯರೊಬ್ಬರು ಹೊರನಡೆಯುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿದಿನ ಸದನದಲ್ಲಿ ಮತ್ತು ಸದನದ ಹೊರಗಡೆ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಇವತ್ತು ನಡೆಯುತ್ತಿರುವ ಹೋರಾಟದಲ್ಲಿ ನಾಯಕರ ಅಸಮಾಧಾನ ಬಹಿರಂಗಗೊಳ್ಳದಿದ್ದರೆ ಸಾಕು.