ಎಲ್ಲ ಚೆನ್ನಾಗಿತ್ತು, ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ನಮ್ಮ ಆನಂದಮಯ ಮತ್ತು ನೆಮ್ಮದಿಯುಕ್ತ ಬದುಕು ವಿಧಿಗೆ ನೋಡಲಾಗಲಿಲ್ಲ ಎಂದು ಸುಮತಿ ಅವರು ದುಃಖಿಸುತ್ತಾ ಹೇಳುತ್ತಾರೆ. ಅವರ ಶೋಕ ಯಾವತ್ತಿಗೂ ಕೊನೆಗೊಳ್ಳಲಾರದು, ಪುತ್ರಶೋಕ ನಿರಂತರ ಅಂತ ಹೇಳೋದು ಸುಳ್ಳಲ್ಲ. ಸಂಬಂಧಿಕರು ತಮ್ಮೊಂದಿಗಿದ್ದಾರೆ, ತನ್ನ ತಮ್ಮ, ಪಲ್ಲವಿಯವರ ಅಣ್ಣ-ತಮ್ಮಂದಿರು ನೀಡುವ ಮಾರ್ಗದರ್ಶನದ ಮೇರೆಗೆ ಬದುಕು ನಡೆಸುತ್ತೇವೆ ಎಂದು ಹೇಳುತ್ತಾರೆ.